ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿ ಗುರುವಾರದಿಂದ ನೂತನವಾಗಿ ಯೆನೆಪೋಯ ಆರೋಗ್ಯ ಕೇಂದ್ರ ಕಾರ್ಯಾರಂಭಗೊಂಡಿತು.
ಭದ್ರಾವತಿ: ನಗರದ ಹೊಸಸೇತುವೆ ರಸ್ತೆಯಲ್ಲಿ ಗುರುವಾರದಿಂದ ನೂತನವಾಗಿ ಯೆನೆಪೋಯ ಆರೋಗ್ಯ ಕೇಂದ್ರ ಕಾರ್ಯಾರಂಭಗೊಂಡಿದ್ದು, ಈಗಾಗಲೇ ರಾಜ್ಯದಾದ್ಯಂತ ಯೆನೆಪೋಯ ಆಸ್ಪತ್ರೆ ಶಾಖೆಗಳು ಜಿಲ್ಲೆ ಹಾಗು ತಾಲೂಕು ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಆಸ್ಪತ್ರೆವತಿಯಿಂದ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಹಲವು ವೈದ್ಯಕೀಯ ಸೇವೆಗಳನ್ನು ಕಲ್ಪಿಸಿಕೊಡಲಾಗಿದ್ದು, ಇದೀಗ ನಗರದಲ್ಲಿ ಆರೋಗ್ಯ ಕೇಂದ್ರ ಕಾರ್ಯಾರಂಭಗೊಂಡಿರುವುದು ಹೆಚ್ಚಿನ ಅನುಕೂಲವಾಗಿದೆ.
ಯೆನೆಪೋಯ ಆಸ್ಪತ್ರೆ ಮಂಗಳೂರು ಕೇಂದ್ರ ಶಾಖೆಯ ಮಾರುಕಟ್ಟೆ ವ್ಯವಸ್ಥಾಪಕ ವಿಜಯಾನಂದ್, ತಾಲೂಕು ಶಾಖೆಯ ಆಶ್ರಫ್, ಅಬ್ದುಲ್, ಕೆವಿನ್ ಸಾಲೋಮನ್, ಸಂಯೋಜಕ ಫೈಜಾನ್, ಮುಖಂಡರಾದ ಫೀರ್ ಷರೀಫ್, ಸಿ.ಎಂ ಖಾದರ್, ಬಿ.ಎನ್ ರಾಜು, ಎನ್. ಮಂಜುನಾಥ್, ಚೌಕ್ ಮಸೀದಿ ಧರ್ಮಗುರು ಎಂ.ಡಿ ಗೌಸ್ ಸೇರಿದಂತೆ ವಿವಿಧ ಮಸೀದಿಗಳ ಧರ್ಮಗುರುಗಳು, ಸ್ವಯಂ ಸೇವಾ ಸಂಸ್ಥೆ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ